S S L C Main Exam-2025

 S S L C ವಿದ್ಯಾರ್ಥಿಗಳಿಗೆ  ಮುಖ್ಯ ಪರೀಕ್ಷೆಗೆ ಸಿದ್ದತೆಗಾಗಿ ಈ ವಿಡಿಯೋಗಳು.



1. Unit- 1st Click Here.


2.  Unit-2 Click Here.


3.Unit-3 Click Here.


4.Unit-4 Click Here


5. Unit-5 Click Here


6.Unit-6 Click Here


.7.Unit-7 Click Here



8. Unit-8 Click Here


ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ- 2025-26

 

ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ- 25-26



ಕಿತ್ತೂರು ರಾಣೆ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ, ಕಿತ್ತೂರು: 2025- 26 ನೇ ಸಾಲಿಗೆ ಪ್ರವೇಶ ಪ್ರಕಟಣೆ.

6ನೆಯ ವರ್ಗಕ್ಕಾಗಿ ಅಖಿಲ ಭಾರತ ಪ್ರವೇಶ ಪರೀಕ್ಷೆ

ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯು ಬಾಲಕಿಯರಿಗಾಗಿಯೇ ಇರುವ ಭಾರತದ ಏಕಮೇವ ಪಬ್ಲಿಕ್ ಶಾಲೆಯಾಗಿದ್ದು ಸೈನಿಕ ತರಬೇತಿ ನೀಡಿ ಸಧೃಡ ಭಾರತದ ನಿರ್ಮಾಣ ಹಾಗೂ ರಾಷ್ಟ್ರಪ್ರೇಮವನ್ನು ಹುಟ್ಟು ಹಾಕುವಂತಹ ಗುರಿ ಹೊಂದಲಾಗಿದೆ. 2025-26 ನೇ ಶೈಕ್ಷಣಿಕ ವರ್ಷದ 6 ನೇ ವರ್ಗದ ಪ್ರವೇಶ ಪರೀಕ್ಷೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅಖಿಲ ಭಾರತ ಪ್ರವೇಶ ಪರೀಕ್ಷೆಯು ಲಿಖಿತ, ದೇಹದಾರ್ಡತೆ, ವೈದ್ಯಕೀಯ ಹಾಗೂ ಮೌಖಿಕ ಸಂದರ್ಶನ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.

ಪರೀಕ್ಷಾ ದಿನಾಂಕ ಯಾವಾಗ?
6 ನೇ ತರಗತಿ ಪ್ರವೇಶ ಪರೀಕ್ಷೆಗಳು ದಿನಾಂಕ:02-02- 2025 ರಂದು ನಡೆಯಲಿವೆ.

ಪರೀಕ್ಷಾ ವಿಧಾನ ಹೇಗಿರಲಿದೆ?

2025-26 ನೇ ಸಾಲಿನ ಪ್ರವೇಶ ಪರೀಕ್ಷೆಗೆ ಓ.ಎಮ್.ಆರ್.[ OMR] ಮಾದರಿ ವಿಧಾನದಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

ಯಾವ ಮಾಧ್ಯಮದಲ್ಲಿ ಪರೀಕ್ಷೆ?

ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳು ಇಂಗ್ಲಿಷ್ ಅಥವಾ ಕನ್ನಡ ದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಪರೀಕ್ಷಾ ಕೇಂದ್ರಗಳ ಮಾಹಿತಿ:

6 ನೇ ತರಗತಿ ಪ್ರವೇಶ ಪರೀಕ್ಷೆಯನ್ನು ಕಿತ್ತೂರ, ವಿಜಯಪುರ, ಬೆಂಗಳೂರು, ಕಲಬುರಗಿ [ಕರ್ನಾಟಕದಲ್ಲಿ ಮಾತ್ರ] ನಡೆಸಲಾಗುತ್ತದೆ.

ವಿದ್ಯಾರ್ಥಿಗಳ ವಯೋಮಿತಿ ಮಾಹಿತಿ:

6 ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡುವ ವಿದ್ಯಾರ್ಥಿಗಳು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಅರ್ಜಿ‌ ಸಲ್ಲಿಕೆ ಮಾಡಬೇಕು. ವಯೋಮಿತಿ: ಜೂನ್ 1, 2013 ಮತ್ತು ಮೇ 31, 2015ರ ನಡುವೆ ಜನಿಸಿದ 5ನೆಯ ವರ್ಗದಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಪರೀಕ್ಷಾ ಶುಲ್ಕ ಎಷ್ಟು ಇರಲಿದೆ:

6 ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡುವ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ರೂ.2000/-, (ರೂ.1,600/-ಪಜಾ/ಪಪಂ ಅಭ್ಯರ್ಥಿಗಳು, ಕರ್ನಾಟಕದ ರಹವಾಸಿಗಳು ಮಾತ್ರ. ಇತ್ತೀಚಿನ ಅಧಿಕೃತ ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಲಗತ್ತಿಸಬೇಕು).

ಶುಲ್ಕದ ವಿವರ:

ರೂ. 2,24,300/-(ಊಟ, ವಸತಿ, ಸಮವಸ್ತ್ರ ಮತ್ತು ಇತರೆ ಠೇವಣಿಗಳು ಸೇರಿ) ಶೈಕ್ಷಣಿಕ ಸಾಮಗ್ರಿ ಮತ್ತು ಇತರೆ ಶುಲ್ಕ ಹೊರತುಪಡಿಸಿ. ಶುಲ್ಕ ಭರಿಸಬೇಕಾಗುತ್ತದೆ.

ಮೀಸಲಾತಿ ವಿವರ:

ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ತಲಾ ಎರಡು ಸ್ಥಾನಗಳನ್ನು ಕಿತ್ತೂರು ಹೋಬಳಿ ಮತ್ತು ರಕ್ಷಣಾ ಸಿಬ್ಬಂದಿ ವರ್ಗದ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತ ಬಾಲಕಿಯರಿಗೆ ಗರಿಷ್ಠ ಮೂರು ಸ್ಥಾನಗಳವರೆಗೆ ಮೀಸಲಾತಿ ಲಭ್ಯವಿದೆ. (ಪ್ರಮಾಣ ಪತ್ರದ ದೃಢೀಕೃತ ನಕಲು ಪ್ರತಿಯನ್ನು ಲಗತ್ತಿಸಬೇಕು).

ವಿದ್ಯಾರ್ಥಿ ವೇತನ:

ಕರ್ನಾಟಕ ಸರ್ಕಾರದ ವಿದ್ಯಾರ್ಥಿವೇತನ ಯೋಜನೆಯು, ಕರ್ನಾಟಕ ರಾಜ್ಯದ ವಾಸಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಪ್ರವೇಶ ಪಡೆದಂತ ಅಭ್ಯರ್ಥಿಗಳು ತಮ್ಮ ಶಿಕ್ಷಣವನ್ನು ಇದೇ ಸಂಸ್ಥೆಯಲ್ಲಿ 12ನೆಯ ತರಗತಿಯವರೆಗೆ ವಿಜ್ಞಾನ ವಿಭಾಗದಲ್ಲಿ ಮುಂದುವರೆಸಬೇಕಾಗುತ್ತವೆ. ವಿಫಲರಾದಲ್ಲಿ ಕರ್ನಾಟಕ ಸರ್ಕಾರದಿಂದ ಪಡೆದಂಥ ವಿದ್ಯಾರ್ಥಿವೇತನವನ್ನು ಸಂಪೂರ್ಣವಾಗಿ ಭರಿಸಬೇಕಾಗುತ್ತದೆ.

ಅರ್ಜಿ‌ ಸಲ್ಲಿಕೆಗೆ ಆರಂಭಿಕ ದಿನಾಂಕ [ದಂಡ ರಹಿತ]:

24 ಅಕ್ಟೋಬರ್ ರಿಂದ 15 ಡಿಸೆಂಬರ್ 2024 ರೂ. 2000/- (1600/- ಪ.ಜಾ/ಪ.ಪಂ. ದವರಿಗೆ, ಅವರು ಕರ್ನಾಟಕ ನಿವಾಸಿಯಾಗಿರಬೇಕು) ಭರ್ತಿ ಮಾಡಲಾದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:20 ಡಿಸೆಂಬರ್ 2024.

ದಂಡ ಸಹಿತವಾಗಿ ಅರ್ಜಿ ಸಲ್ಲಿಕೆ ದಿನಾಂಕ:16 ರಿಂದ 31 ಡಿಸೆಂಬರ್ 2024.


ರೂ. 2,500/- (2,100/- ಪ.ಜಾ/ಪ.ಪಂ. ದವರಿಗೆ. ಅವರು ಕರ್ನಾಟಕ ನಿವಾಸಿಯಾಗಿರಬೇಕು) ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 05 ಜನವರಿ 2025

ಮುಖ್ಯ ಸೂಚನೆ ನೋಡಿ :

ಆನ್ ಲೈನ್ ಹಣ ಪಾವತಿಯನ್ನು ಚಾಲತಾಣ: www.kittursainikschool.org ಮುಖಾಂತರ ಮಾಡಬೇಕು. ಇದೇ ಜಾಲತಾಣದಿಂದಲೂ ವಿವರಣಾ ಪುಸ್ತಕ ಹಾಗೂ ಅರ್ಜಿಪಾರ್ಮಗಳನ್ನು ಪಡೆಯಬಹುದು.( (Ph: 08288-234607)

ಪೂರ್ಣ ಪ್ರಮಾಣ ಶುಲ್ಕ ಪಾವತಿ ಪ್ರವೇಶ ಯೋಜನೆ :

ಅಭ್ಯರ್ಥಿಗಳ ಅರ್ಹತೆ (ಲಿಖಿತ ಪರೀಕ್ಷೆ+ಸಂದರ್ಶನ)ಯು ಸಾಧಾರಣ ಪ್ರತಿಭಾ ಮಟ್ಟದ್ದಾಗಿದ್ದಲ್ಲಿ ಸೀಟುಗಳು ಲಭ್ಯವಿದ್ದ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಶುಲ್ಕ ಭರಿಸಿ ಪ್ರವೇಶ ಪಡೆಯಬಹುದು. ಇಂಥ ಸ್ಥಳ ಕಾಯ್ದಿಡುವಿಕೆಗೆ ಪಾಲಕರು ತಮ್ಮ ಇಚ್ಛೆಯನ್ನು ಅರ್ಜಿಫಾರ್ಮಗಳಲ್ಲಿ ನಮೂದಿಸುವುದು.

ಪ್ರಮುಖ ಅಂಶಗಳು:

ಧಾರವಾಡದ ಹಂಚಿನಮನೆ ಸಂಸ್ಥೆಯೊಂದಿಗೆ ಶೈಕ್ಷಣಿಕ ಪಾಲುದಾರಿಯ ಅಡಿಯಲ್ಲಿ ಜೆಇಇ (ಪ್ರಧಾನ)/ ಎ.ಐ.ಪಿ.ಎಮ್.ಟಿ./ಸಿ.ಇ.ಟಿ/ಎನ್.ಇ.ಇ.ಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಜ್ಞರಿಂದ ವಿಶೇಷ ತರಬೇತಿ ತರಗತಿಗಳನ್ನು ನಡೆಸಲಾಗುವುದು, NCC, ತರಬೇತಿ, ಗೈಡ್ ತರಬೇತಿ, NDA ತರಬೇತಿ, ಕುದುರೆ ಸವಾರಿ, ಈಜು ತರಬೇತಿ ಅಲ್ಲದೆ ಯೋಗ, ಧ್ಯಾನ ಹಾಗೂ ಪ್ರಾರ್ಥನೆಗಳನ್ನು ಒಳಗೊಂಡಿದೆ.

ಸೂಚನೆಗಳು:

  • ಪರೀಕ್ಷಾ ಮಾದರಿ, ಪ್ರವೇಶ ಮಾನದಂಡ ಮತ್ತು ಪ್ರಶ್ನೆಪತ್ರಿಕೆಗಳ ವಸ್ತುತಾತ್ಪರ್ಯವನ್ನು ಬದಲಿಸುವ ಹಕ್ಕನ್ನು ಶಾಲಾ ಆಡಳಿತ ಮಂಡಳಿಯು ಹೊಂದಿದೆ.
  • ಪ್ರವೇಶ ಪತ್ರಗಳನ್ನು ಸಾಮಾನ್ಯ ಅಂಚೆ ಚೀಟಿ ಮುಖಾಂತರ ಕಳಿಸಲಾಗುವುದು.
  • ವಿವರಣಾ ಪುಸ್ತಕಗಳ ಪ್ರವೇಶ ಪತ್ರ ಹಾಗೂ ಫಲಿತಾಂಶ ಅಂಚೆ ಮೂಲಕ ತಲುಪದೇ ಇದ್ದಲ್ಲಿ ಅಥವಾ ವಿಳಂಬವಾದಲ್ಲಿ ಶಾಲೆ ಜವಾಬ್ದಾರಿಯಾಗಿರುವದಿಲ್ಲ.
  • ಭರ್ತಿಮಾಡಿದ ಅರ್ಜಿ ಫಾರ್ಮಗಳ ಜೊತೆ ಸ್ವ- ವಿಳಾಸ ಹೊಂದಿದ ರೂ 5/- ಸ್ಟಾಂಪ್ ಲಗತ್ತಿಸಿದ ಲಕೋಟೆಯನ್ನು ಕಳುಹಿಸತಕ್ಕದ್ದು,
  • ಕಿತ್ತೂರು ಹೋಬಳಿ ಹಾಗೂ ರಕ್ಷಣಾ ಸೇವಾ ಸಿಬ್ಬಂದಿ ಮೀಸಲಾತಿ ಬಯಸುವವರು ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು,
  • ಒಮ್ಮೆ ಸಂದಾಯಿಸಿದ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಮರುಪಾವತಿಸುವುದಿಲ್ಲ.
  • ಇತ್ತೀಚಿನ ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
  • ಸುಳ್ಳು ಆದಾಯ ಪ್ರಮಾಣ ಪತ್ರ  ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬಾರದು.
  • ಕಛೇರಿಯ ಸಮಯ: ವಾರದ ದಿನಗಳಲ್ಲಿ ಸೋಮವಾರ ಬೆ.9.00 ರಿಂದ ಮ.1.30 ಮತ್ತು ಮ.3.00 ರಿಂದ ಸಂಜೆ .5.30 ರ ವರಗೆ ಭಾನುವಾರ/ ರಜಾದಿನಗಳಂದು ತೆರೆದಿರುವುದಿಲ್ಲ.
  • VI ನೇ ತರಗತಿಗೆ (2025-26) ಪ್ರವೇಶದ ಸಮಯದಲಿ ಸಲಿ ಸಬೇಕಾದ ಪ್ರಮುಖ ದಾಖಲೆಗಳು/ ತೆಗೆದುಕೊಳ್ಳಬೇಕಾದ ಕ್ರಮಗಳು.

    1. ಹಾಲ್ ಟಿಕೆಟ್

    2. ಅಭ್ಯರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್ ಅನ್ನು ನವೀಕರಿಸಲಾಗಿದೆ. (updated)

    3. ಎಸ್‌ಬಿಐ ಅಥವಾ ಕೆನರಾ ಬ್ಯಾಂಕ್‌ನಲ್ಲಿ ಬ್ಯಾಂಕ್ ಖಾತೆ ತೆರೆಯಿರಿ ಮತ್ತು ಅಭ್ಯರ್ಥಿಯ ಖಾತೆ ವಿವರಗಳನ್ನು ಒದಗಿಸಿ. ಅಭ್ಯರ್ಥಿಯು ಡಿಬಿಟಿಗಾಗಿ ತನ್ನ ಸ್ವಂತ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಸರ್ಕಾರದಿಂದ ವಿದ್ಯಾರ್ಥಿವೇತನದ ಮೊತ್ತದ ನೇರ ಬ್ಯಾಂಕ್ ವರ್ಗಾವಣೆ.

    4. ಇತ್ತೀಚಿನ ಆದಾಯ ಪ್ರಮಾಣಪತ್ರ. ಪೋಷಕರು/ಗಳು ಸರ್ಕಾರಿ ನೌಕರರಾಗಿದ್ದರೆ, ಕಳೆದ ತಿಂಗಳ ವೇತನ ಚೀಟಿಯನ್ನು ಒದಗಿಸಿ. (recent)

    5. ಪೋಷಕರು/ಗಳು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಇತ್ತೀಚಿನ ITR ಅನ್ನು ಒದಗಿಸಿ.

    6. ಜಾತಿ ಪ್ರಮಾಣಪತ್ರ. (updated)

    7. ವರ್ಗಾವಣೆ ಪ್ರಮಾಣಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು SATS ನಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯು ಒಂದೇ ಆಗಿರಬೇಕು. ಯಾವುದೇ ವ್ಯತ್ಯಾಸಗಳು/ಅಸಾಮರಸ್ಯಗಳಿದ್ದಲ್ಲಿ, ವಿದ್ಯಾರ್ಥಿವೇತನದ ಮೊತ್ತವನ್ನು ವರ್ಗಾಯಿಸಲಾಗುವುದಿಲ್ಲ ಮತ್ತು ಅವುಗಳನ್ನು ಸರಿಪಡಿಸುವ ಜವಾಬ್ದಾರಿಯು ಪೋಷಕರ ಮೇಲಿರುತ್ತದೆ. ಆದ್ದರಿಂದ, ನಿಮ್ಮ ಸ್ವಂತ ಹಿತಾಸಕ್ತಿಯಲ್ಲಿ, ಯಾವುದೇ ತಿದ್ದುಪಡಿಗಳನ್ನು ಮಾಡಬೇಕಾದರೆ, ಪ್ರವೇಶ ಪ್ರಕ್ರಿಯೆಯ ಸುಲಭತೆ ಮತ್ತು ನಂತರದ ಅನಾನುಕೂಲತೆಗಾಗಿ ದಯವಿಟ್ಟು ಅವುಗಳನ್ನು ಮಾಡಿ.

  • ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ.

  • ಪತ್ರಿಕಾ ಪ್ರಕಟಣೆ ಡೌನ್ ಲೋಡ್ ಮಾಡಲು Click Here

7 th Pay Calculator.

 

 


@  CURRENT PAY SCALE /  ಪ್ರಸ್ತುತ ವೇತನ  ಶ್ರೇಣಿ :  ( 30350 -58250)

@ Present Basic Pay/ ಈಗಿನ ಮೂಲ ವೇತನ : ( 37900)

@Employee Group/ ನೌಕಕರನ ವರ್ಗ : A/B/C/D.

@ HRA City Grade / ಮನೆ ಬಾಡಿಗೆ ಭತ್ಯೆ ವರ್ಗ : A/B/C.

ಈ ಮೇಲಿನ ಮಾಹಿತಿಗಳನ್ನು ನಮೂದಿಸಿ Submit ಮಾಡಿ.



2024 ನೇ ಸಾಲಿನ CET ಫಲಿತಾಂಶ

 2024 ನೇ ಸಾಲಿನ CET ಫಲಿತಾಂಶ

CET Result Click Here.

S S L C Result-1

 2024 ನೇ ಸಾಲಿನ S S L C ಪರೀಕ್ಷೆ-1 ರ ಫಲಿತಾಂಶ.


ಫಲಿತಾಂಶ ವೀಕ್ಷಿಸಲು ಕ್ಲಿಕ್ ಮಾಡಿ

1) ನೊಂದಣಿ ಸಂಖ್ಯೆ.

2) ಜನ್ಮ ದಿನಾಂಕ.

ನಮೂದಿಸಿ‌ ಫಲಿತಾಂಶ ವೀಕ್ಷಿಸಿ.....


ಅಭಿನಂದನೆಗಳು.

5th,8th and 9th ಪರೀಕ್ಷೆಯ ವಿಶ್ಲೇಷಣೆ

 ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸುವ 5ನೇ,8ನೇ ಮತ್ತು 9ನೇ ತರಗತಿಗಳ ವಾರ್ಷಿಕ ಮೌಲ್ಯಾಂಕನ ಪರೀಕ್ಷೆಯ ವಿಶ್ಲೇಷಣೆಯ ವಿವರಣೆ.

Click Here

ಶ್ರೀ ಪರಮೇಶ್ವರಪ್ಪ ಎಮ್ ವಿ ರವರ ಪರಿಚಯ

 ಕ್ಷೇತ್ರ ಶಿಕ್ಷಣಾದಿಕಾರಿಗಳ ಕಾರ್ಯಾಲಯ ಮಧುಗಿರಿಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಮಾರ್ಚ್ ತಿಂಗಳ 31 ರಂದು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಶ್ರೀಯುತರ ಕಿರು ಪರಿಚಯ.

ಶ್ರೀ ಪರಮೇಶ್ವರಪ್ಪ ಎಮ್ ವಿ ರವರು.
ದೈಹಿಕ ಶಿಕ್ಷಣ ಪರಿವೀಕ್ಷಕರು.
BEO ಕಾರ್ಯಾಲಯ ಮಧುಗಿರಿ.

ಕೋಟೆಕೊತ್ತಲ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗರೆಯ ವೀರಣ್ಣ ಮತ್ತು ನಿಂಗಮ್ಮ ದಂಪತಿಯ ಐದನೇಯ ಮಗನಾಗಿ ದಿನಾಂಕ:28-03-1964 ರಲ್ಲಿ ಜನಿದರು.
ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದು,ಪ್ರೌಢಶಾಲಾ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ಕಾಬರಹಳ್ಳಿಯಲ್ಲಿ ಪಡೆದುಕೊಂಡರು. ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಹಿರಿಯೂರಿನಲ್ಲಿ ಪೂರೈಸಿದರು.
ಪದವಿ ಶಿಕ್ಷಣವನ್ನು ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಹಿರಿಯೂರಿನಲ್ಲಿ ಪಡೆದು BPed ತರಬೇತಿಯನ್ನು ತುಂಗಾಭದ್ರ ದೈಹಿಕ ಶಿಕ್ಷಣ ಮಾಹಾವಿದ್ಯಾಲಯ ಕೊಟ್ಟೂರಿನಲ್ಲಿ ಪಡೆದುಕೊಂಡು ಸರ್ಕಾರಿ ಸೇವೆಯನ್ನು ದೈಹಿಕ ಶಿಕ್ಷಣ ಶಿಕ್ಷಕರಾಗಿ ದಿನಾಂಕ:20:07:1994 ರಂದು ಸರ್ಕಾರಿ ಪ್ರೌಢಶಾಲೆ ಕಾಡತಿಪ್ಪೂರು ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಾರಂಭಿಸಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ತುಮಕೂರು ಜಿಲ್ಲೆಯ ಗುಳಹರಿವೆ ಸರ್ಕಾರಿ ಪ್ರೌಢಶಾಲೆಯಲ್ಲಿ ದಿನಾಂಕ: 18-07-2005 ರಿಂದ 15-12-2021 ರ ವರೆಗೆ ಸೇವೆ ಸಲ್ಲಿಸಿದರು.ಇದರ ನಡುವೆ 2018ರಿಂದ 2021 ನೇ ವರ್ಷದವರೆಗೆ ತುಮಕೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಭಾರಿಯಾಗಿ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಇವರು ದಿನಾಂಕ:16-12-2021 ರಿಂದ ಪದನ್ನೋತ್ತಿ ಹೊಂದಿ ಮಧುಗಿರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ  ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಪರಮೇಶ್ವರಪ್ಪ ರವರು 29 ವರ್ಷಗಳ ಕಾಲ ಸರ್ಕಾರಿ ಸೇವೆಯನ್ನು ಸಲ್ಲಿಸಿ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ.
ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ 2001 ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ "ಜನ ಮೆಚ್ಚಿದ ಶಿಕ್ಷಕ" ಪ್ರಶಸ್ತಿ ಹಾಗೂ 2024 ನೇ ಸಾಲಿನ ಗಣರಾಜೋತ್ಸವದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ "ಗಣರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಲಾಗಿದೆ.
ತಮ್ಮ ಸೇವಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಜಿಲ್ಲಾ,ವಿಭಾಗ ಮಟ್ಟಕ್ಕೆ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವಂತೆ ಮಾರ್ಗದರ್ಶನ ನೀಡಿರುತ್ತಾರೆ.
ಪ್ರಾಮಾಣಿಕವಾಗಿ ತಮ್ಮ ಹುದ್ದೆಯನ್ನು ಗೌರವಿಸುತ್ತಾ ಎಲ್ಲರ ಮೆಚ್ಚುಗೆ ಪಾತ್ರರಾದ ಶ್ರೀ ಪರಮೇಶ್ವರಪ್ಪ ಎಮ್ ವಿ ರವರು ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಹೃದಯ ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತಾ ನಿವೃತ್ತ ಜೀವನ ನೆಮ್ಮದಿಯ,ಆರೋಗ್ಯಯುತ ಕಾಲವಾಗಿರಲೆಂದು ದೇವರಲ್ಲಿ ಪಾರ್ಥಿಸುತ್ತೇವೆ.



2023-24 ನೇ ಸಾಲಿನ ವಾರ್ಷಿಕ ಮೌಲ್ಯಾಂಕನ ಪರೀಕ್ಷೆಯ ಮಾಹಿತಿ

5 ನೇ,8 ನೇ & 9 ನೇ ತರಗತಿಗಳ ವಾರ್ಷಿಕ ಮೌಲ್ಯಾಂಕನಕ್ಕೆ ಪ್ರಶ್ನೆ ಪತ್ರಿಕೆ ಮಾದರಿ ಮತ್ತು ಕಲಿಕಾಂಶವಾರು ಪ್ರಶ್ನೆಗಳಮಾಹಿತಿ.

Result P U C -2025